ಆತ ಪೋಟೋ ಕ್ಲಿಕ್ ಮಾಡಲು ಬಿಡಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಈ ಇಬ್ಬರು ಹೀರೋಗಳು ತೆರೆಯ ಮರೆಯ ಕಾಯಿಗಳಂತೆ ಈಗಲೂ ಇದ್ದಾರೆ. ದಕ್ಷಿಣ ಕನ್ನಡದ ಜಿಲ್ಲೆಯ ಆದಿವಾಸಿ ಜನರಾದ ಕೊರಗರ ಅಭಿವೃದ್ಧಿಗಾಗಿ ದುಡಿಯುತ್ತಿರುವ ಶೀನ ಶೆಟ್ಟಿ, ಕೃಷ್ಣಮೂಲ್ಯ ಅವರೆ ಈ ತೆರೆಯಮರೆಯ ಹೀರೋಗಳು. ಮಂಗಳೂರಿನಲ್ಲಿ ಇವರ ಸಖ್ಯ ನನ್ನೊಂದಿಗೆ ಬೆಳೆಯಿತು. ಇವರೊಂದಿಗೆ ನಾನು ಕೂಡ ದಕ್ಷಿಣ ಕನ್ನಡ ಜಿಲ್ಲೆಯನ್ನು ಪೂರಾ ಸುತ್ತು ಹೊಡೆದಂದ್ದಾಯಿತು, ಏನಿವರ ಕನಸುಗಳು ಅಂತಾ ಕೆದಕುತ್ತಾ ಹೋದಂತೆ ಜನರಿಗೆ ತಮ್ಮ ಜೀವನವನ್ನೆ ಸಮರ್ಪಣೆ ಮಾಡಿಕೊಂಡ ಕಥನ ಬಿಚ್ಚಿಕೊಳ್ಳುತ್ತದೆ.
ಶೀನಶೆಟ್ಟಿ, ಕೃಷ್ಣಮೂಲ್ಯರು ನಕುಲ,ಸಹದೇವ, ಲವ-ಕುಶ ಇದ್ದಂತೆ, ಅವರಿಬ್ಬರು ಒಬ್ಬರಿಗೊಬ್ಬರು ಬಿಟ್ಟಿರುವುದಿಲ್ಲ. ಸಮಾಜಕಾರ್ಯದಲ್ಲಿ ಆಗಿನ ಕಾಲಕ್ಕೆ ಸ್ನಾತಕೋತ್ತರ ಪದವಿ ಪಡೆದರೂ ಅವರು ಎಂದೆಂದಿಗೂ ಕೆಲಸ ಆಸೆಯ ಗುರಿ ಹೊತ್ತವರೆ ಅಲ್ಲ. ಬ್ಯಾಂಕುಗಳಲ್ಲಿ ಉದ್ಯೋಗ ಅರಸಿ ಬಂದರೂ ಅದನ್ನು ಒಲ್ಲೆ ಎಂದವರು, ತಮ್ಮ ಸಣ್ಣ ವಯಸ್ಸಿನಲ್ಲೆ ಸಮಾಜ ಸೇವೆಯ ತುಡಿತ ಬೆಳೆಸಿಕೊಂಡ ಇವರಿಬ್ಬರು ದಕ್ಷಿಣ ಕನ್ನಡ ಜಿಲ್ಲೆಯ ಅಣ್ಣಾ ಹಜಾರೆ ಇದ್ದಂತೆ. ನವ ಸಾಕ್ಷರರ ಆಂದೋಲನದ ಮೂಲಕ ಜಿಲ್ಲೆಯ ಮೂಲೆ ಮೂಲೆಗಳನ್ನು ಎಡ ತಾಕಿರುವ ಇವರು ಅದರಲ್ಲಿ ಸಾಧಿಸಿರುವ ಪ್ರಗತಿ ಅಸಾಧಾರಣ.
೮೦ರ ಪ್ರಾಯದ ಚೀಂಕ್ರ ಮೂಲ್ಯ ಜೀವನ ಸಾಧನೆ ಕೃಷ್ಣ, ಶೀನ ಶಟ್ಟಿ ಅವರ ಆಸಧಾರಣ ಸಮಾಜ ಸೇವೆಗೆ ಒಂದು ಉದಾಹರಣೆ. ಕುಡಿತ, ಹೆಣ್ಣು ಮಕ್ಕಳ ಕೀಟಲೆ, ಹೆಂಡತಿಯೊಂದಿಗೆ ಜಗಳ ಬಡಿದಾಟದಲ್ಲೇ ಜೀವನ ಕಂಡಿದ್ದ ಚೀಂಕ್ರ ಪೂಜಾರಿ ಇಂದು ದಕ್ಷಿಣ ಕನ್ನಡ ಜಿಲ್ಲೆ ಅಲ್ಲದೇ ರಾಜ್ಯದ ಇತರೆ ಜಿಲ್ಲೆಗಳಲ್ಲಿ ನಡೆದ ಸಾಕ್ಷರತಾ ಶಿಬಿರಗಳಲ್ಲಿ ಸಂಪನ್ಮೂಲ ಮತ್ತು ಕಲಿಯುವವರ ಪ್ರೇರಕ ಶಕ್ತಿಯಾದ ಹಿಂದೆ ಈ ಅಣ್ಣ ಹಜಾರೆ (ಮೂಲ್ಯ, ಶೆಟ್ಟಿ) ಇದ್ದಾರೆ. ಕೊರಗ ಸಮುದಾಯದ ಕಮಲ ಗ್ರಾಮ ಪಂಚಾಯತ್ ಸದಸ್ಯೆಯಾಗಿ ಆಯ್ಕೆ ಯಾದುದ್ದರ ಹಿಂದೆ ಇವರ ಶ್ರಮವಿದೆ. ಮಾಧ್ಯಮದಿಂದ ದೂರವೇ ಉಳಿಯುವ ಈ ಇಬ್ಬರು ದುಡಿವ, ನೆಲದ ನಾಯಕರು, ಸಾಮೂಹಿಕ ಶ್ರಮದಾನದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಚ್ಛತಾ ಆಂದೋಲನದ ಹೊಸ ಮಾದರಿಗಳನ್ನೆ ಹುಟ್ಟಿಹಾಕಿದರು, ಗೋಳ್ತಮಜಲು ಮಾದರಿ, ಇರಾ ಮಾದರಿಗಳು ಇಡೀ ರಾಜ್ಯ, ರಾಷ್ಟ್ರ, ವಿದೇಶಗಳ ಗಮನ ಸೆಳೆದವು. ರಾಜ್ಯದಲ್ಲಿ ಶಿವಮೊಗ್ಗ ಹೊರತುಪಡಿಸಿ ಯಾವುದೇ ಜಿಲ್ಲೆಗಳಲ್ಲಿ ಸಾಧಿಸಲಾರದಂತ ಸಾಧನೆ ಈ ಜಿಲ್ಲೆಯಲ್ಲಿ ಸ್ವಚ್ಚತಾ ಆಂದೋಲನದಲ್ಲಿ ನಡೆಯಿತು, ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸಲು ಇವರು ಕೈಗೊಂಡ ಶ್ರಮದಾನ, ಗ್ರಾಮ, ಗ್ರಾಮಗಳ ನಡುವಿನ ಸ್ಪರ್ಧೆ ದೇಶದ ಎಲ್ಲ ಕಾಣದಂತ ಹೊಸ ಪರಿಕಲ್ಪನೆಗಳು.ಜನಪ್ರತಿನಿಧಿಗಳು, ಸರ್ಕಾರಗಳು ಮಾಡದಂಥ ಕಾರ್ಯಕ್ರಮಗಳನ್ನು ಮಾಡುವ ಮೂಲಕ ತುಳಿತಕ್ಕೆ ಒಳಗಾದ ಜನತೆಗೆ ಬದುಕಿನ ಭರವಸೆಯ ಆಶಾಕಿರಣಗಳನ್ನು ಮೂಡಿಸಿರುವ ಧೀಮಂತ ಮಣ್ಣಿನ ಮಕ್ಕಳಿವರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವಾಗಲೂ ನೆನೆಯುವ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆ, ಮೋಹನ ಆಳ್ವರ ಸಾಂಸ್ಕೃತಿಕ ಹಿರಿತನಗಳ ಜೊತೆಗೆ ಕನಸಿನ ಊರಿನ ಕದತಟ್ಟಿದವರಲ್ಲಿ ಕೃಷ್ಣಮೂಲ್ಯರು, ಶೀನ ಶೆಟ್ಟಿಯೂ ಸೇರಿದಂತೆ, ವಿಪರ್ಯಾಸ ವೆಂದರೆ ಉಳಿದ ಇಬ್ಬರ ಬಳಿ ಶಿಕ್ಷಣ ಸಂಸ್ಥೆಗಳಿವೆ, ಧಾರ್ಮಿಕ ಶಕ್ತಿ ಕೇಂದ್ರವಿದೆ, ಹಣವಿದೆ ಹಾಗೂ ರಾಜಕೀಯ ಶಕ್ತಿ ಇದೆ, ಆದರೆ ಇದ್ಯಾದುವುದು ಇಲ್ಲದೇ ಸಾವಿರಾರು ಜನರ ಬದುಕನ್ನು ರೂಪಿಸಿರುವ ಈ ಇಬ್ಬರು ನಾಯಕರನ್ನು ಸರ್ಕಾರ ಇದೂವರೆಗೂ ಸರಿಯಾಗಿ ಗುರುತಿಸುವ ಕೆಲಸ ಮಾಡಿಲ್ಲ. ಈ ಇಬ್ಬರನ್ನು ಸರ್ಕಾರ ಗುರುತಿಸುವಂಥಾದರೆ ಅದು ನಾಡಿನ ಹೊಸ ಭಾಗ್ಯ ಮಾತ್ರವಲ್ಲ ಅಭಿವೃದ್ಧಿಯ ಪರಿಕಲ್ಪನೆಗಳು ಬದಲಾದಾವು, ಹಳ್ಳಿ, ಹಳ್ಳಿಗಳು ಅನಭಿವೃದ್ಧಿ, ಅಜ್ಞಾನದ ಮೂಸೆಯಿಂದ ಹೊರಬರಲು ಹೊಸ ಆಶಾಕಿರಣಗಳಾಗಲಿವೆ.
Sunday, July 25, 2010
Saturday, July 24, 2010
peoplenews@1: ಒಂದು ಹಳೆಯ ಊಟದ ಕಥೆ
http://peoplenews1.blogspot.com/2010/07/blog-post.html?spref=bl: "ಮಂಗಳೂರಿನಲ್ಲಿ ವರದಿಗಾರನಾಗಿ ಕೆಲಸ ಮಾಡುವಾಗ, ಸಮೀಪದ ಸರ್ಕಾರಿ ಕಾಲೇಜೊಂದರಲ್ಲಿ ಮಧ್ಯಾಹ್ನದ ಊಟ ನೀಡುತ್ತಿದ್ದಾರೆ ಎಂಬ ಸುದ್ದಿ ಬಂತು. ಕಾಲೇಜು ಊಟದ ಬೆನ್ನತ್ತಿ ಹೋದಾಗ ತ..."
ಒಂದು ಹಳೆಯ ಊಟದ ಕಥೆ
ಮಂಗಳೂರಿನಲ್ಲಿ ವರದಿಗಾರನಾಗಿ ಕೆಲಸ ಮಾಡುವಾಗ, ಸಮೀಪದ ಸರ್ಕಾರಿ ಕಾಲೇಜೊಂದರಲ್ಲಿ ಮಧ್ಯಾಹ್ನದ ಊಟ ನೀಡುತ್ತಿದ್ದಾರೆ ಎಂಬ ಸುದ್ದಿ ಬಂತು. ಕಾಲೇಜು ಊಟದ ಬೆನ್ನತ್ತಿ ಹೋದಾಗ ತೆರೆದುಕೊಂಡ ಸತ್ಯಗಳೇ ಬೇರೆ. ವರ್ಷವೊಂದರ ಹಿಂದೆ ಬರೆದ ಈ ಲೇಖನವನ್ನು ಗಲ್ಫ್ ಕನ್ನಡಿಗ ತಾಣದವರು ಪ್ರಕಟಿಸಿದ್ದರು. ಮೊನ್ನೆ ಜಾಲ ಜಾಲಾಡುವಾಗ ಮತ್ತೆ ಈ ಸುದ್ದಿ ಕೈಗೆ ಸಿಕ್ತು. ಅಲ್ಲಿಂದ ನಕಲಿಸಿ, ಇಲ್ಲಿ ಹಾಕಿದ್ದೇನೆ..
--------
‘ಕಾಲೇಜು ಊಟದ’ ಬೆನ್ನಟ್ಟಿ ಹೋದಾಗ ತೆರೆದುಕೊಂಡ ಸತ್ಯಗಳೇ ಬೇರೆ. ಸರ್ಕಾರದ ನಯಾ ಪೈಸೆಯ ನೆರವೂ ಇಲ್ಲದೇ, ಉಪನ್ಯಾಸಕರು ಸ್ವಯಂ ಆಸಕ್ತಿ ವಹಿಸಿ ‘ಜೋಳಿಗೆ’ ಹಿಡಿಯುತ್ತಾ ವರ್ತಕರು, ದಾನಿಗಳಿಂದ ಹಣ, ಅಕ್ಕಿ, ಬೇಳೆ, ಧಾನ್ಯ ಸಂಗ್ರಹಿಸಿ ನಡೆಸುತ್ತಿ ರುವ ‘ಉಚಿತ ಕಾಲೇಜು ಊಟ’ದಿಂದಾಗಿ ಸರ್ಕಾರಿ ಕಾಲೇಜೊಂದು ಅದ್ಭುತ ಫಲಿ ತಾಂಶ ಪಡೆಯುವಲ್ಲಿ ಯಶಸ್ವಿಯಾದ ಕಥೆ ತೆರೆದುಕೊಂಡಿತು.
ಐದು ವರ್ಷಗಳ ಹಿಂದೆ ಈ ಕಾಲೇಜಿಗೆ ಮಕ್ಕಳನ್ನು ಸೇರಿಸಲು ಹಿಂದುಮುಂದು ನೋಡು ತ್ತಿದ್ದ ಪೋಷಕರೀಗ ತಮ್ಮ ಪ್ರತಿಭಾವಂತ ಮಕ್ಕಳನ್ನು ಸರ್ಕಾರಿ ಕಾಲೇಜಿಗೆ ಸೇರಿಸು ವಂತೆ ವಿಶ್ವಾಸದ ಭರವಸೆಯನ್ನು ಈ ‘ಊಚಿತ ಊಟ’ ತಂದುಕೊಟ್ಟಿರುವುದು ಅಚ್ಚರಿ ಎನಿಸುತ್ತದೆ.
ಮಂಗಳೂರಿನ ರಥಬೀದಿ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಐದು ವರ್ಷಗಳಿಂದಲೂ ಮಧ್ಯಾಹ್ನ ಉಚಿತ ಊಟ ನೀಡುತ್ತಿದ್ದೇವೆ. ಊಟಕ್ಕೆ ಗಂಜಿ ಊಟ, ಪಲ್ಯ, ಚಟ್ನಿ ನೀಡಲಾಗುತ್ತಿದೆ ಎಂಬ ವಿವರ ಕಾಲೇಜಿನ ಪ್ರಾಂಶುಪಾಲ ಪಿ.ಪಿ. ಜೋಸೆಫ್ (9448622864) ಅವರಿಂದ ಸಿಕ್ಕಿತ್ತು.
ಕಲೆ, ವಿಜ್ಞಾನ, ವಾಣಿಜ್ಯ ವಿಭಾಗ ಸೇರಿ ಒಟ್ಟು 492 ವಿದ್ಯಾರ್ಥಿನಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದು, ಇವರಲ್ಲಿ 80 ವಿದ್ಯಾರ್ಥಿನಿಯರು ಮಧ್ಯಾಹ್ನದ ಉಚಿತ ಊಟದ ಪ್ರಯೋ ಜನ ಪಡೆಯುತ್ತಿದ್ದಾರೆ. ಹಿಂದಿನ ವರ್ಷ 150 ವಿದ್ಯಾರ್ಥಿನಿಯರು ಊಟ ಮಾಡುತ್ತಿದ್ದರು.
ಕಳೆದ ವರ್ಷದವರೆಗೂ ಇದೇ ಕಾಲೇಜಿನ ಹೈಸ್ಕೂಲು ವಿದ್ಯಾರ್ಥಿಗಳಿಗೂ ಉಚಿತ ಊಟದ ಪ್ರಯೋಜನ ಸಿಕ್ಕುತ್ತಿತ್ತು. ಆದರೆ ಈ ವರ್ಷದಿಂದ ಹೈಸ್ಕೂಲು ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಬಿಸಿಯೂಟ ನೀಡುತ್ತಿರುವುದರಿಂದ ಅವರನ್ನು ಕೈಬಿಡಲಾಗಿದೆ.
ಏನು ಕಾರಣ?:
ವಿದ್ಯಾರ್ಥಿನಿಯರು ಹೊಟ್ಟೆನೋವು, ತಲೆಸುತ್ತಿನಿಂದ ಬೀಳುತ್ತಿದ್ದ ಘಟನೆಗಳು ಕಾಲೇಜಿ ನಲ್ಲಿ ಪ್ರತಿದಿನ ನಡೆಯುತ್ತಲೇ ಇದ್ದವು. ಮಧ್ಯಾಹ್ನದ ನಂತರ ತರಗತಿ ಕಲಿಕೆಯಲ್ಲೂ ನಿರಾಸಕ್ತಿ ತೋರುತ್ತಿದ್ದರು. ವಿದ್ಯಾರ್ಥಿನಿಯರ ಈ ನಡವಳಿಕೆ ಬಗ್ಗೆ ಸೂಕ್ಷ್ಮವಾಗಿ ಕೇಳಿದಾ ಗ ಬಹಳಷ್ಟು ವಿದ್ಯಾರ್ಥಿನಿಯರು ತಿಂಡಿ. ಊಟ ಇಲ್ಲದೇ ಕಾಲೇಜಿಗೆ ಬರುತ್ತಿದ್ದಾರೆ ಎಂಬುದು ತಿಳಿಯಿತು. ಅಂದೇ ಮಕ್ಕಳಿಗೆ ಉಚಿತ ಊಟ ಕೊಡುವ ಚಿಂತನೆ ತಲೆ ಹೊಕ್ಕಿತು ಎನ್ನುತ್ತಾರೆ ಪಿ.ಪಿ. ಜೋಸೆಫ್.
ಉಚಿತ ಊಟದ ಪ್ರಸ್ತಾವವನ್ನು ಕಾಲೇಜು ಅಭಿವೃದ್ಧಿ ಮಂಡಳಿ ಮುಂದೆ ಇಟ್ಟಾಗ ಪೋತ್ಸಾಹವೂ ಸಿಕ್ಕಿತು. ಶಾಸಕ ಎನ್. ಯೋಗೀಶ್ ಭಟ್ ಅವರೂ ಕೈ ಜೋಡಿಸಿದರು. 2003ರಲ್ಲೇ ಊಟ ಆರಂಭಿಸಬೇಕೆಂದು ಹಟ ತೊಟ್ಟರೂ ಅದು ಸಾಧ್ಯವಾಗಲಿಲ್ಲ. ಕೊನೆ ಗೂ 2004ರಿಂದ ಉಚಿತ ಊಟ ನೀಡಲಾಗುತ್ತಿದೆ.
ಊಟಕ್ಕಾಗಿ ‘ಜೋಳಿಗೆ’ ಹಿಡಿಯುವ ಕಾಲೇಜಿನ ಪ್ರಾಂಶುಪಾಲರು, ಅಭಿವೃದ್ಧಿ ಮಂಡಳಿ ಯ ಸದಸ್ಯರಿಗೆ ದಾನಿಗಳು ಸಾಕಷ್ಟು ನೆರವಿನ ಹಸ್ತ ಚಾಚಿದ್ದಾರೆ. ಊಟಕ್ಕಾಗಿ ವರ್ತಕರು ಉಚಿತವಾಗಿ ಅಕ್ಕಿ, ಧಾನ್ಯ ನೀಡಿದರೆ, ಮತ್ತೆ ಕೆಲವರು ಹಣ ನೀಡುತ್ತಾರೆ. ಹೀಗೆ ಹಣ, ಧಾನ್ಯ ಸಂಗ್ರಹಿಸಿ ಮಕ್ಕಳಿಗೆ ಊಟ ನೀಡಲಾಗುತ್ತಿದೆ.
‘ಉಚಿತ ಊಟ ವ್ಯವಸ್ಥೆ ಅಚ್ಚುಕಟ್ಟಾಗಿ ನೆಡೆಯಲು ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದ್ದು, ಖಾತೆಯಲ್ಲಿ ಹಣ ಖಾಲಿಯಾದ ನಿದರ್ಶನಗಳೇ ಇಲ್ಲಿಯವರೆಗೂ ಇಲ್ಲ’ ಎನ್ನುತ್ತಾರೆ ಕಾಲೇಜಿನ ವಾಣಿಜ್ಯ ಉಪನ್ಯಾಸಕ ಕೃಷ್ಣಮೂರ್ತಿ. ಎಲ್ಲ ವಿದ್ಯಾರ್ಥಿನಿಯರಿಗೂ ಉಚಿತ ಊಟವಿಲ್ಲ. ಕಾಲೇಜಿಗೆ ಪ್ರವೇಶ ನೀಡಿದ ನಂತರ ಎಲ್ಲರಿಗೂ ‘ಊಟದ ಪ್ರಶ್ನೆ ಪತ್ರಿಕೆ’ ನೀಡಲಾಗುವುದು. ಪ್ರಶ್ನೆಗಳ ಉತ್ತರ ಆಧರಿಸಿ ಮಕ್ಕ ಳ ಮನೆಯ ಪರಿಸ್ಥಿತಿಯನ್ನು ಗಮನಿಸಿ ಊಟ ನೀಡಲಾಗುವುದು. ಯಾವುದೇ ಕಾರಣಕ್ಕೂ ‘ಬಡತನ’ಎಂಬ ಶಬ್ದ ಎಲ್ಲೂ ಬಳಕೆ ಮಾಡುವುದಿಲ್ಲ. ಊಟ ಮಾಡುವುದರಿಂದ ವಿದ್ಯಾರ್ಥಿನಿಯರಲ್ಲಿ ಕೀಳರಿಮೆ ಕಾಡದಂತೆ ಎಚ್ಚರಿಕೆಯನ್ನು ವಹಿಸ ಲಾಗಿದೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸದಿದ್ದರೆ ಊಟ ಕಟ್ ಮಾಡುವ ಸಂಪ್ರದಾಯವನ್ನೂ ಪಾಲಿಸಲಾಗಿದೆ.
ಕಾಲೇಜಿನಲ್ಲಿ ಊಟ ಆರಂಭಿಸಿದ ನಂತರ ಕಾಲೇಜಿನ ಫಲಿತಾಂಶದಲ್ಲೂ ಗಣ ನೀಯ ಏರಿಕೆ ಕಂಡಿದೆ. ಐದು ವರ್ಷದ ಹಿಂದೆ ಶೇಕಡ 60ರಿಂದ 70ರ ಒಳಗೆ ಇದ್ದ ಫಲಿತಾಂಶ ಶೇಕಡ 93.5ರಷ್ಟಕ್ಕೆ ಹೆಚ್ಚಿದೆ. ಈ ವರ್ಷ ಶೇಕಡ 95ಕ್ಕೂ ಅಧಿಕ ಫಲಿತಾಂಶದ ನಿರೀಕ್ಷೆ ಯಲ್ಲಿ ಕಾಲೇಜು ಇದೆ.
‘ಬಡತನ, ಇನ್ನಿತರ ಕಾರಣಗಳಿಂದಾಗಿ ಸರ್ಕಾರಿ ಕಾಲೇಜಿನ ಅದರಲ್ಲೂ ಗ್ರಾಮೀಣ ಭಾಗದಿಂದ ಕಾಲೇಜಿಗೆ ಬರುವ ಮಕ್ಕಳು ಮಧ್ಯಾಹ್ನ ಊಟದಿಂದ ವಂಚಿತರಾಗುತ್ತಿದ್ದಾರೆ. ಊಟವಿಲ್ಲದೆ ಬಳಲಿ ಮನಸ್ಸಿನ ಮೇಲೆ ಏಕ್ರಾಗತೆ ಕಳೆದುಕೊಳ್ಳುವುದರಿಂದ ಅದು ಓದಿನ ಮೇಲೂ ಪರಿಣಾಮ ಬೀರುತ್ತದೆ. ಸರ್ಕಾರಿ ಕಾಲೇಜುಗಳ ಫಲಿತಾಂಶ ಕುಸಿಯಲು ಇರುವ ಕಾರಣಗಳಲ್ಲಿ ಇದು ಒಂದು’ ಎನ್ನುತ್ತಾರೆ ವೈದ್ಯರಾದ ಡಾ.ಲಲಿತಾ ರಮೇಶ್.
ಸರ್ಕಾರಿ ಕಾಲೇಜೆಂದರೆ ಅಲ್ಲಿ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವ, ಮಾನಸಿಕ ಸಮಸ್ಯೆಗಳಿಂದ ನರಳುವ ಮಕ್ಕಳೇ ಹೆಚ್ಚಿರುತ್ತಾರೆ. ಈ ಮಕ್ಕಳಿಗೆ ಕನಿಷ್ಠ ಊಟ ನೀಡುವ ಮೂಲಕ ಧೈರ್ಯ ನೀಡಿದರೆ ಕಲಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಾರೆ ಎಂಬುದಕ್ಕೆ ರಥಬೀದಿ ಕಾಲೇಜು ಪ್ರಾಯೋಗಿಕ ಉದಾಹರಣೆಯಾಗಿದೆ.
‘ಕಾಲೇಜಿನಲ್ಲಿ ಉಚಿತ ಊಟ ಆರಂಭವಾದ ನಂತರ ಫಲಿತಾಂಶದಲ್ಲಿ ಗಣನೀಯ ಹೆಚ್ಚಳ ವಾಗಿದೆ. ಕಲಿಕೆಯಲ್ಲೂ ಮಕ್ಕಳ ಆಸಕ್ತಿ ಹೆಚ್ಚಿದೆ’ ಎನ್ನುತ್ತಾರೆ ಈ ಕಾಲೇಜಿನ ಉಪನ್ಯಾಸ ಕರು. ಕಾಲೇಜು ಕಲಿಯುತ್ತಿರುವ ‘ಅರ್ಹ’ ಮಕ್ಕಳಿಗೂ ಸರ್ಕಾರ ಬಿಸಿಯೂಟ ವಿಸ್ತರಿಸಿದರೆ ಸರ್ಕಾರಿ ಕಾಲೇಜುಗಳಲ್ಲೂ ಉತ್ತಮ ಫಲಿತಾಂಶದ ‘ಸಂತಸ’ ಕಾಣಬಹುದೇನೋ?
--------
‘ಕಾಲೇಜು ಊಟದ’ ಬೆನ್ನಟ್ಟಿ ಹೋದಾಗ ತೆರೆದುಕೊಂಡ ಸತ್ಯಗಳೇ ಬೇರೆ. ಸರ್ಕಾರದ ನಯಾ ಪೈಸೆಯ ನೆರವೂ ಇಲ್ಲದೇ, ಉಪನ್ಯಾಸಕರು ಸ್ವಯಂ ಆಸಕ್ತಿ ವಹಿಸಿ ‘ಜೋಳಿಗೆ’ ಹಿಡಿಯುತ್ತಾ ವರ್ತಕರು, ದಾನಿಗಳಿಂದ ಹಣ, ಅಕ್ಕಿ, ಬೇಳೆ, ಧಾನ್ಯ ಸಂಗ್ರಹಿಸಿ ನಡೆಸುತ್ತಿ ರುವ ‘ಉಚಿತ ಕಾಲೇಜು ಊಟ’ದಿಂದಾಗಿ ಸರ್ಕಾರಿ ಕಾಲೇಜೊಂದು ಅದ್ಭುತ ಫಲಿ ತಾಂಶ ಪಡೆಯುವಲ್ಲಿ ಯಶಸ್ವಿಯಾದ ಕಥೆ ತೆರೆದುಕೊಂಡಿತು.
ಐದು ವರ್ಷಗಳ ಹಿಂದೆ ಈ ಕಾಲೇಜಿಗೆ ಮಕ್ಕಳನ್ನು ಸೇರಿಸಲು ಹಿಂದುಮುಂದು ನೋಡು ತ್ತಿದ್ದ ಪೋಷಕರೀಗ ತಮ್ಮ ಪ್ರತಿಭಾವಂತ ಮಕ್ಕಳನ್ನು ಸರ್ಕಾರಿ ಕಾಲೇಜಿಗೆ ಸೇರಿಸು ವಂತೆ ವಿಶ್ವಾಸದ ಭರವಸೆಯನ್ನು ಈ ‘ಊಚಿತ ಊಟ’ ತಂದುಕೊಟ್ಟಿರುವುದು ಅಚ್ಚರಿ ಎನಿಸುತ್ತದೆ.
ಮಂಗಳೂರಿನ ರಥಬೀದಿ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಐದು ವರ್ಷಗಳಿಂದಲೂ ಮಧ್ಯಾಹ್ನ ಉಚಿತ ಊಟ ನೀಡುತ್ತಿದ್ದೇವೆ. ಊಟಕ್ಕೆ ಗಂಜಿ ಊಟ, ಪಲ್ಯ, ಚಟ್ನಿ ನೀಡಲಾಗುತ್ತಿದೆ ಎಂಬ ವಿವರ ಕಾಲೇಜಿನ ಪ್ರಾಂಶುಪಾಲ ಪಿ.ಪಿ. ಜೋಸೆಫ್ (9448622864) ಅವರಿಂದ ಸಿಕ್ಕಿತ್ತು.
ಕಲೆ, ವಿಜ್ಞಾನ, ವಾಣಿಜ್ಯ ವಿಭಾಗ ಸೇರಿ ಒಟ್ಟು 492 ವಿದ್ಯಾರ್ಥಿನಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದು, ಇವರಲ್ಲಿ 80 ವಿದ್ಯಾರ್ಥಿನಿಯರು ಮಧ್ಯಾಹ್ನದ ಉಚಿತ ಊಟದ ಪ್ರಯೋ ಜನ ಪಡೆಯುತ್ತಿದ್ದಾರೆ. ಹಿಂದಿನ ವರ್ಷ 150 ವಿದ್ಯಾರ್ಥಿನಿಯರು ಊಟ ಮಾಡುತ್ತಿದ್ದರು.
ಕಳೆದ ವರ್ಷದವರೆಗೂ ಇದೇ ಕಾಲೇಜಿನ ಹೈಸ್ಕೂಲು ವಿದ್ಯಾರ್ಥಿಗಳಿಗೂ ಉಚಿತ ಊಟದ ಪ್ರಯೋಜನ ಸಿಕ್ಕುತ್ತಿತ್ತು. ಆದರೆ ಈ ವರ್ಷದಿಂದ ಹೈಸ್ಕೂಲು ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಬಿಸಿಯೂಟ ನೀಡುತ್ತಿರುವುದರಿಂದ ಅವರನ್ನು ಕೈಬಿಡಲಾಗಿದೆ.
ಏನು ಕಾರಣ?:
ವಿದ್ಯಾರ್ಥಿನಿಯರು ಹೊಟ್ಟೆನೋವು, ತಲೆಸುತ್ತಿನಿಂದ ಬೀಳುತ್ತಿದ್ದ ಘಟನೆಗಳು ಕಾಲೇಜಿ ನಲ್ಲಿ ಪ್ರತಿದಿನ ನಡೆಯುತ್ತಲೇ ಇದ್ದವು. ಮಧ್ಯಾಹ್ನದ ನಂತರ ತರಗತಿ ಕಲಿಕೆಯಲ್ಲೂ ನಿರಾಸಕ್ತಿ ತೋರುತ್ತಿದ್ದರು. ವಿದ್ಯಾರ್ಥಿನಿಯರ ಈ ನಡವಳಿಕೆ ಬಗ್ಗೆ ಸೂಕ್ಷ್ಮವಾಗಿ ಕೇಳಿದಾ ಗ ಬಹಳಷ್ಟು ವಿದ್ಯಾರ್ಥಿನಿಯರು ತಿಂಡಿ. ಊಟ ಇಲ್ಲದೇ ಕಾಲೇಜಿಗೆ ಬರುತ್ತಿದ್ದಾರೆ ಎಂಬುದು ತಿಳಿಯಿತು. ಅಂದೇ ಮಕ್ಕಳಿಗೆ ಉಚಿತ ಊಟ ಕೊಡುವ ಚಿಂತನೆ ತಲೆ ಹೊಕ್ಕಿತು ಎನ್ನುತ್ತಾರೆ ಪಿ.ಪಿ. ಜೋಸೆಫ್.
ಉಚಿತ ಊಟದ ಪ್ರಸ್ತಾವವನ್ನು ಕಾಲೇಜು ಅಭಿವೃದ್ಧಿ ಮಂಡಳಿ ಮುಂದೆ ಇಟ್ಟಾಗ ಪೋತ್ಸಾಹವೂ ಸಿಕ್ಕಿತು. ಶಾಸಕ ಎನ್. ಯೋಗೀಶ್ ಭಟ್ ಅವರೂ ಕೈ ಜೋಡಿಸಿದರು. 2003ರಲ್ಲೇ ಊಟ ಆರಂಭಿಸಬೇಕೆಂದು ಹಟ ತೊಟ್ಟರೂ ಅದು ಸಾಧ್ಯವಾಗಲಿಲ್ಲ. ಕೊನೆ ಗೂ 2004ರಿಂದ ಉಚಿತ ಊಟ ನೀಡಲಾಗುತ್ತಿದೆ.
ಊಟಕ್ಕಾಗಿ ‘ಜೋಳಿಗೆ’ ಹಿಡಿಯುವ ಕಾಲೇಜಿನ ಪ್ರಾಂಶುಪಾಲರು, ಅಭಿವೃದ್ಧಿ ಮಂಡಳಿ ಯ ಸದಸ್ಯರಿಗೆ ದಾನಿಗಳು ಸಾಕಷ್ಟು ನೆರವಿನ ಹಸ್ತ ಚಾಚಿದ್ದಾರೆ. ಊಟಕ್ಕಾಗಿ ವರ್ತಕರು ಉಚಿತವಾಗಿ ಅಕ್ಕಿ, ಧಾನ್ಯ ನೀಡಿದರೆ, ಮತ್ತೆ ಕೆಲವರು ಹಣ ನೀಡುತ್ತಾರೆ. ಹೀಗೆ ಹಣ, ಧಾನ್ಯ ಸಂಗ್ರಹಿಸಿ ಮಕ್ಕಳಿಗೆ ಊಟ ನೀಡಲಾಗುತ್ತಿದೆ.
‘ಉಚಿತ ಊಟ ವ್ಯವಸ್ಥೆ ಅಚ್ಚುಕಟ್ಟಾಗಿ ನೆಡೆಯಲು ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದ್ದು, ಖಾತೆಯಲ್ಲಿ ಹಣ ಖಾಲಿಯಾದ ನಿದರ್ಶನಗಳೇ ಇಲ್ಲಿಯವರೆಗೂ ಇಲ್ಲ’ ಎನ್ನುತ್ತಾರೆ ಕಾಲೇಜಿನ ವಾಣಿಜ್ಯ ಉಪನ್ಯಾಸಕ ಕೃಷ್ಣಮೂರ್ತಿ. ಎಲ್ಲ ವಿದ್ಯಾರ್ಥಿನಿಯರಿಗೂ ಉಚಿತ ಊಟವಿಲ್ಲ. ಕಾಲೇಜಿಗೆ ಪ್ರವೇಶ ನೀಡಿದ ನಂತರ ಎಲ್ಲರಿಗೂ ‘ಊಟದ ಪ್ರಶ್ನೆ ಪತ್ರಿಕೆ’ ನೀಡಲಾಗುವುದು. ಪ್ರಶ್ನೆಗಳ ಉತ್ತರ ಆಧರಿಸಿ ಮಕ್ಕ ಳ ಮನೆಯ ಪರಿಸ್ಥಿತಿಯನ್ನು ಗಮನಿಸಿ ಊಟ ನೀಡಲಾಗುವುದು. ಯಾವುದೇ ಕಾರಣಕ್ಕೂ ‘ಬಡತನ’ಎಂಬ ಶಬ್ದ ಎಲ್ಲೂ ಬಳಕೆ ಮಾಡುವುದಿಲ್ಲ. ಊಟ ಮಾಡುವುದರಿಂದ ವಿದ್ಯಾರ್ಥಿನಿಯರಲ್ಲಿ ಕೀಳರಿಮೆ ಕಾಡದಂತೆ ಎಚ್ಚರಿಕೆಯನ್ನು ವಹಿಸ ಲಾಗಿದೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸದಿದ್ದರೆ ಊಟ ಕಟ್ ಮಾಡುವ ಸಂಪ್ರದಾಯವನ್ನೂ ಪಾಲಿಸಲಾಗಿದೆ.
ಕಾಲೇಜಿನಲ್ಲಿ ಊಟ ಆರಂಭಿಸಿದ ನಂತರ ಕಾಲೇಜಿನ ಫಲಿತಾಂಶದಲ್ಲೂ ಗಣ ನೀಯ ಏರಿಕೆ ಕಂಡಿದೆ. ಐದು ವರ್ಷದ ಹಿಂದೆ ಶೇಕಡ 60ರಿಂದ 70ರ ಒಳಗೆ ಇದ್ದ ಫಲಿತಾಂಶ ಶೇಕಡ 93.5ರಷ್ಟಕ್ಕೆ ಹೆಚ್ಚಿದೆ. ಈ ವರ್ಷ ಶೇಕಡ 95ಕ್ಕೂ ಅಧಿಕ ಫಲಿತಾಂಶದ ನಿರೀಕ್ಷೆ ಯಲ್ಲಿ ಕಾಲೇಜು ಇದೆ.
‘ಬಡತನ, ಇನ್ನಿತರ ಕಾರಣಗಳಿಂದಾಗಿ ಸರ್ಕಾರಿ ಕಾಲೇಜಿನ ಅದರಲ್ಲೂ ಗ್ರಾಮೀಣ ಭಾಗದಿಂದ ಕಾಲೇಜಿಗೆ ಬರುವ ಮಕ್ಕಳು ಮಧ್ಯಾಹ್ನ ಊಟದಿಂದ ವಂಚಿತರಾಗುತ್ತಿದ್ದಾರೆ. ಊಟವಿಲ್ಲದೆ ಬಳಲಿ ಮನಸ್ಸಿನ ಮೇಲೆ ಏಕ್ರಾಗತೆ ಕಳೆದುಕೊಳ್ಳುವುದರಿಂದ ಅದು ಓದಿನ ಮೇಲೂ ಪರಿಣಾಮ ಬೀರುತ್ತದೆ. ಸರ್ಕಾರಿ ಕಾಲೇಜುಗಳ ಫಲಿತಾಂಶ ಕುಸಿಯಲು ಇರುವ ಕಾರಣಗಳಲ್ಲಿ ಇದು ಒಂದು’ ಎನ್ನುತ್ತಾರೆ ವೈದ್ಯರಾದ ಡಾ.ಲಲಿತಾ ರಮೇಶ್.
ಸರ್ಕಾರಿ ಕಾಲೇಜೆಂದರೆ ಅಲ್ಲಿ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವ, ಮಾನಸಿಕ ಸಮಸ್ಯೆಗಳಿಂದ ನರಳುವ ಮಕ್ಕಳೇ ಹೆಚ್ಚಿರುತ್ತಾರೆ. ಈ ಮಕ್ಕಳಿಗೆ ಕನಿಷ್ಠ ಊಟ ನೀಡುವ ಮೂಲಕ ಧೈರ್ಯ ನೀಡಿದರೆ ಕಲಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಾರೆ ಎಂಬುದಕ್ಕೆ ರಥಬೀದಿ ಕಾಲೇಜು ಪ್ರಾಯೋಗಿಕ ಉದಾಹರಣೆಯಾಗಿದೆ.
‘ಕಾಲೇಜಿನಲ್ಲಿ ಉಚಿತ ಊಟ ಆರಂಭವಾದ ನಂತರ ಫಲಿತಾಂಶದಲ್ಲಿ ಗಣನೀಯ ಹೆಚ್ಚಳ ವಾಗಿದೆ. ಕಲಿಕೆಯಲ್ಲೂ ಮಕ್ಕಳ ಆಸಕ್ತಿ ಹೆಚ್ಚಿದೆ’ ಎನ್ನುತ್ತಾರೆ ಈ ಕಾಲೇಜಿನ ಉಪನ್ಯಾಸ ಕರು. ಕಾಲೇಜು ಕಲಿಯುತ್ತಿರುವ ‘ಅರ್ಹ’ ಮಕ್ಕಳಿಗೂ ಸರ್ಕಾರ ಬಿಸಿಯೂಟ ವಿಸ್ತರಿಸಿದರೆ ಸರ್ಕಾರಿ ಕಾಲೇಜುಗಳಲ್ಲೂ ಉತ್ತಮ ಫಲಿತಾಂಶದ ‘ಸಂತಸ’ ಕಾಣಬಹುದೇನೋ?
Subscribe to:
Posts (Atom)